ನಾವ್ಯಾಕೆ ಹೀಗೆ?

ವಂದೇ ಮಾತರಂ ಗೀತೆ ರಚಿಸಿದವರು ಯಾರು?
ಐ ಥಿಂಕ್ ಆಶಾ ಬೋಸ್ಲೆ
ಐ ಥಿಂಕ್ ಸುಭಾಷ್ ಚಂದ್ರ ಬೋಸ್
ಐ ಥಿಂಕ್  ಎ. ಆರ್. ರೆಹಮಾನ್
ರಾಂಗ್ ಆನ್ಸರ್...ರಾಂಗ್ ಆನ್ಸರ್...
Quikly text me----space ur answer and ur name to....ಬೇಗ ಬೇಗನೆ ನಿಮ್ಮ ಆನ್ಸರ್ಸ್ ಕಳಿಸಿ
u can win couple passes for Latest Movie...
ಅಂತಾ ಆರ್ ಜೆ (ರೇಡಿಯೋ ಜಾಕಿ) ಪಟ ಪಟನೆ ಸ್ವಲ್ಪ ಕನ್ನಡ ಇನ್ನು ಸ್ವಲ್ಪ ಇಂಗ್ಲೀಷ್ (ಕಂಗ್ಲೀಷ್)ನಲ್ಲಿ ಹೇಳೋಕೆ ಶುರು ಮಾಡಿ
ಅಧ೯ ಗಂಟೆಯಾಗಿತ್ತು. ಅಲ್ಲಿಯವರೆಗೆ ಯಾರೊಬ್ಬರು ಮೇಲಿನಪ್ರಶ್ನೆಗೆ ಸರಿಯಾಗಿ ಉತ್ತರ ನೀಡಲಿಲ್ಲ.
ಎಫ್ ಎಂಗಳಲ್ಲಿ ಯಾವತ್ತೂ ಇಂಥಾ ಸ್ಪಧೆ೯ ನಡೆಯುತ್ತಲೇ ಇರುತ್ತೆ. ಮೊನ್ನೆ ಮೊನ್ನೆಯಷ್ಟೇ ಎಫ್ ಎಂನಲ್ಲಿ ವಂದೇ ಮಾತರಂ
ಗೀತೆ ರಚಿಸಿದವರು ಯಾರು? ಎಂಬ ಪ್ರಶ್ನೆಗೆ ಕೇಳುಗರು ಹೇಳಿದ ಉತ್ತರ ಕೇಳಿ ನಾನು ದಂಗಾಗಿ ಬಿಟ್ಟೆ.
ಅರೇ...ನಾವು ಭಾರತೀಯರು ಇಷ್ಟು ದಡ್ಡರಾ? ಅಂತಾ ಅನುಮಾನ ಶುರುವಾಯ್ತು.
ಶಾಲಾ ದಿನಗಳಲ್ಲಿ ರಾಷ್ಟ್ರಗೀತೆ ರಚಿಸಿದವರು ಯಾರು? ಭಾರತದ ಗಡಿ ಪ್ರದೇಶಗಳಾವುವು? ರಾಜ್ಯಗಳೆಷ್ಟು? ಎಂದು ಕಲಿತಿದ್ದ ನಾವು
ಇದೀಗ ಭಾರತದ ಬಗ್ಗೆ ಸಿಂಪಲ್ ಪ್ರಶ್ನೆಗಳನ್ನು ಕೇಳಿದರೆ I think ....ಅಂತಾ ಏನೇನೋ ತಪ್ಪು ತಪ್ಪು ಹೆಸರು ಹೇಳ್ತಾ ಇದ್ದೀವಲ್ಲಾ! 

ಗಮನಿಸಲೇ ಬೇಕಾದ ವಿಷಯ ಏನಪ್ಪಾ ಅಂದ್ರೆ, ಈ ಪ್ರಶ್ನೆಗೆ ಉತ್ತರ  ನೀಡಿದವರು (ನೀಡುವವರು) ಯಾರೂ ಅವಿದ್ಯಾವಂತರಲ್ಲ.
ಬಹುತೇಕ ಮಂದಿ ದೊಡ್ಡ ದೊಡ್ಡ ಕಂಪೆನಿಯ ಉದ್ಯೋಗಿಗಳೇ.ಡಿಗ್ರಿ ಮೇಲೆ ಡಿಗ್ರಿ ಗಳಿಸಿ ಉನ್ನತ ಹುದ್ದೆಯನ್ನು ಅಲಂಕರಿಸಿ ಕೈ ತುಂಬಾ
ಸಂಬಳ ಗಳಿಸುತ್ತಿರುವ ಈ ಮಹನೀಯರಿಗೆ ಬಾಲ್ಯದಲ್ಲಿ ಕಲಿತ ಪಾಠವೆಲ್ಲಾ ಮರೆತು ಹೋಯಿತೆ?.ಇರಲಿ ಬಿಡಿ, ಚಿಕ್ಕಂದಿನಲ್ಲಿ ಓದಿದ್ದು
ಎಲ್ಲಾ ವಿಷಯಗಳ ನೆನಪಿರಲೇ ಬೇಕೆಂದಿಲ್ಲ. ಕನಿಷ್ಠ ನಮ್ಮ ದೇಶದ ಬಗ್ಗೆ ಸ್ವಲ್ಪವಾದರೂ ಗೊತ್ತಿರಬೇಕಲ್ವಾ? 

ಅದೇ ವೇಳೆ ಇನ್ಯಾವುದೋ ವಿದೇಶಿ ಸಂಗೀತಗಾರನ ಬಗ್ಗೆಯೋ, ನಟನ ಬಗ್ಗೆಯೋ ಪ್ರಶ್ನೆ ಕೇಳಿದ್ದರೆ ಅದಕ್ಕೆ ಥಟ್ ಅಂತಾ
ಉತ್ತರ ಬರುತ್ತಿತ್ತು. ನಾವ್ಯಾಕೆ ಹೀಗೆ?. ನಮ್ಮ ದೇಶದ ಬಗ್ಗೆ ನಮಗೆ ಅದೇಕೆ ಅಷ್ಟೊಂದು ಅಸಡ್ಡೆ? ಜಗತ್ತಿನ ಎಲ್ಲಾ ವಿಷಯಗಳನ್ನು
ಕಲಿತು ಪಂಡಿತರೆನಿಸಿಕೊಳ್ಳುವ ಛಲದಲ್ಲಿ ತಾಯ್ನಾಡಿನ ಬಗ್ಗೆ ತಿಳಿದು ಕೊಳ್ಳಲು ನಮ್ಮವರಿಗೆ ಸಮಯ ಸಾಕಾಗದೇ ಹೋಯಿತೆ?

ಈ ಮೊದಲು ಒಂದು ಟಿವಿ ಕಾರ್ಯಕ್ರಮದಲ್ಲಿ ಅಲ್ಲಿ ನೆರೆದಿದ್ದ ಜನರಲ್ಲಿ ರಾಷ್ಟ್ರಗೀತೆ ಹಾಡುವಂತೆ ಹೇಳಲಾಯಿತು. ಅಲ್ಲಿದ್ದವರಲ್ಲಿ ಹೆಚ್ಚಿನವರು
ಯುವಕ ಯುವತಿಯರೇ ಆಗಿದ್ದರು. ಅದರಲ್ಲಿ ಯಾರೊಬ್ಬರೂ ಸರಿಯಾಗಿ ರಾಷ್ಟ್ರಗೀತೆಯನ್ನು ಹಾಡಲೇ ಇಲ್ಲ. ಇನ್ನು ಕೆಲವರಿಗೆ ನಮ್ಮ ದೇಶಕ್ಕೆ
ಸ್ವಾತಂತ್ರ ಸಿಕ್ಕಿದ್ದು ಯಾವಾಗ ಎಂಬ ಇಸ್ವಿಯೇ ಮರೆತು ಹೋಗಿದೆ!. ಈ ಮೇಲಿನ ಎರಡು ಘಟನೆಗಳನ್ನು ನೋಡಿದರೆ ಎಲ್ಲರಿಗಿಂತಲೂ
ಹೆಚ್ಚು ಬುದ್ದಿವಂತರು ಎಂದೆನಿಸಿಕೊಂಡ ಭಾರತೀಯರು ದೇಶದ ಬಗ್ಗೆ ತಿಳಿದುಕೊಳ್ಳುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 

ಒಂದೆಡೆ ಜಗತ್ತು ಬೆಳವಣಿಗೆಯ ಪಥದಲ್ಲಿ ಸಾಗುತ್ತಿರುವಾಗ ನಾವು ಭಾರತೀಯರು ವಿದೇಶಿಯರು ಹೇಳಿದ್ದು ಮಾಡಿದ್ದು ಎಲ್ಲವೂ ಹೈಟೆಕ್
ಎಂದು ಅವರ ದಾರಿಯಲ್ಲೇ ಸಾಗಲು ಬಯಸುತ್ತೇವೆ. ಆದರೆ ವಿದೇಶಿಯರು ಭಾರತದ ಸಂಸ್ಕ್ರತಿಯ ಬಗ್ಗೆ ಅಧ್ಯಯನ ನಡೆಸಲು ಭಾರತದತ್ತ
ಧಾವಿಸುತ್ತಾರೆ. ಅವರ ಉಡುಗೆ ತೊಡುಗೆಗಳನ್ನು ನೋಡಿ ನಾವು ಕಚೀ೯ಫ್ ನಲ್ಲಿ ಲಂಗ ಹೊಲಿಸಿದ್ದೇವೆ.ನಮ್ಮ ಸಾರಿಗಳಿಂದ ವಿದೇಶಿ
ಮಹಿಳೆಯರು ಮಾನ ಮುಚ್ಚುತ್ತಾರೆ! ಒಳ್ಳೆಯ ವಿಷಯಗಳನ್ನು ಎಲ್ಲರಿಂದಲೂ ಕಲಿತು ಕೊಳ್ಳಬಹುದು..ಮತ್ತು ಕಲಿಯಲೇ ಬೇಕು.
ಹಾಗಂತ ನಮ್ಮ ದೇಶವನ್ನು ಕಡೆಗಣಿಸುವುದು ಸರೀನಾ?

ಇಂದಿನ ಯುವ ಜನಾಂಗ ತಮ್ಮ ದೇಶದ ಬಗ್ಗೆ ಆಸ್ಥೆ ವಹಿಸದಿದ್ದರೆ ಮುಂದಿನ ಪೀಳಿಗೆಯ ಸ್ಥಿತಿ ಏನಾಗಬೇಡ?. ಗಾಂಧಿ ಯಾರು? ಅಂತಾ ಕೇಳಿದರೆ
ಬೋಳು ತಲೆ, ಚರಕದಲ್ಲಿ ನೂಲು ನೇಯುತ್ತಿರುವ ಗಾಂಧೀ ತಾತಾನ ಚಿತ್ರ ಮನಸ್ಸಲ್ಲಿ ಮೂಡುವ ಬದಲು ಪೂಜಾಗಾಂಧಿಯ ಪೋಸ್ಟರ್ ಮನಸ್ಸಲ್ಲಿ ಎದ್ದು
ನಿಲ್ಲುತ್ತದೆ. ನಮಗೆ ಆದಶ೯ವಾಗಿರುವ ಹಿರಿಯರ ಫೋಟೋಗಳಿಗೆ ಫ್ರೇಮ್ ಹಾಕಿ ಗೋಡೆಗೆ ನೇತು ಹಾಕುವ ಜತೆಗೆ ಅವರ ಆದಶ೯ಗಳನ್ನು ಕೂಡಾ
ನಾವು ಫ್ರೇಮ್ ಹಾಕಿ ಬಂಧಿಸಿದ್ದೇವೆ. ನಾವು ಸಮಯದೊಂದಿಗೆ ಚಲಿಸುತ್ತಿದ್ದೇವೆ ನಿಜ.ಆದರೆ ಸಮಯದ ಅರಿವು ಇಲ್ಲದೆಯೇ ಚಲಿಸುವುದು ನೀರಿನಲ್ಲಿ
ಹೋಮ ಮಾಡಿದಂತೆಯೇ. 

ಎಫ್ ಎಂನಲ್ಲಿ ಕೇಳಿದ ಪ್ರಶ್ನೆಯಿಂದಾಗಿ ಇಷ್ಟೆಲ್ಲಾ ಬರೆಯಬೇಕಾಗಿ ಬಂತು. ಅಂತೂ ಒಟ್ಟಿನಲ್ಲಿ ನಮ್ಮ ದೇಶದಲ್ಲಿನ ಪುರಾತನ ವಸ್ತುಗಳೆಲ್ಲಾ ಮ್ಯೂಸಿಯಂ ಸೇರಿ
ವಿದೇಶಿಗರ ಆಕಷ೯ಣೆಯ ಬಿಂದುವಾಯ್ತು.ನಾವು ಮಾತ್ರ ವಿದೇಶಿಯರಿಗೆ ಆಕಷಿ೯ತರಾಗಿ ಬರೀ ಸೊನ್ನೆಯಾಗುತ್ತಿದ್ದೇವೆಯೇನೋ
ಎಂಬ ಶಂಕೆ ಮನಸ್ಸನ್ನು ಕಾಡತೊಡಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.